ಮುಚ್ಚಿ

ನ್ಯಾಯಾಲಯಗಳು

ಕೊಡಗು ಜಿಲ್ಲಾ ನ್ಯಾಯಾಲಯದ ಬಗ್ಗೆ

ಇತಿಹಾಸದಲ್ಲಿ ಕೊಡಗಿನ ನ್ಯಾಯಾಂಗವನ್ನು ದಕ್ಷಿಣ ಭಾರತದ ಸುಂದರ ಗುಡ್ಡಗಾಡು ಭೂಪ್ರದೇಶವನ್ನು ರಚಿಸುವ ಕೂರ್ಗ್ ಎಂದು ಕರೆಯಲಾಗುತ್ತಿತ್ತು, ಮೂರು ಶತಮಾನಗಳ ಆಚೆಗೆ ಮೂಲವನ್ನು ಪತ್ತೆಹಚ್ಚಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಆದಾಗ್ಯೂ, ಭಾರತದಲ್ಲಿ ಅನೇಕ ರಾಜವಂಶಗಳಂತೆಯೇ, ಈ ಜಿಲ್ಲೆ ದಕ್ಷಿಣ ಕನ್ನಡ ಕರಾವಳಿ ಜಿಲ್ಲೆ ಪ್ರಸ್ತುತ ಮೈಸೂರು ಮತ್ತು ಹಾಸನ ಜಿಲ್ಲೆಯ ಭಾಗಗಳು ಮತ್ತು ಕೇರಳದ ಗಡಿ ಪ್ರದೇಶಗಳ ವರೆಗೆ ವಿಸ್ತರಿಸಿದೆ. ಈ ಜಿಲ್ಲೆಯನ್ನು ಸ್ಥಳೀಯ ವಿವಿಧ ಗುಂಪುಗಳು, ನಾಯಕರುಗಳು, ಆಳಿದರು. ಅವರುಗಳಲ್ಲಿ ಕೊನೆಯವರು ಹಾಲೇರಿಯ ಲಿಂಗಾಯತ್ ರಾಜರು ಇವರು 1834 ರಲ್ಲಿ ಬ್ರಿಟೀಷರು ಸೇರ್ಪಡೆಗೊಳ್ಳುವವರೆಗೂ ಜಿಲ್ಲೆಯನ್ನು ಆಳಿದರು.
ಇದರ ಮಧ್ಯದಲ್ಲಿ ಮೈಸೂರು ಆಡಳಿತಗಾರರಾದ- ಹೈದರ್ ಅಲಿ ಮತ್ತು ಟಿಪ್ಪು ಒಂದು ದಶಕ ಜಿಲ್ಲೆಯನ್ನು ಆಳಿದರು. ಈ ಅವಧಿಯಲ್ಲಿ ಕಾನೂನಿಗೆ ಹೆಚ್ಚಿನ ಪ್ರಾಮುಖ್ಯತೆಯಾಗಿತ್ತು, ಆದರೂ ಪ್ರಮುಖ ನಾಗರಿಕರು ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಜಮೀನಿನ ಅವಧಿ ಮತ್ತು ವಿಭಾಗಗಳು ಮತ್ತು ತೆರಿಗೆ ವ್ಯವಸ್ಥೆಯು ತಮ್ಮ ಬೇರುಗಳನ್ನು ಹೊಂದಿದ್ದವು ಎಂದು ಇಲ್ಲಿ ಉಲ್ಲೇಖಿಸಬೇಕಾಗಿದೆ. ಇದು ಜಿಲ್ಲೆಯನ್ನು ಆಡಳಿತ ಮಾಡಿದವರಿಗೆ ಸಂತೋಷ ಉಂಟು ಮಾಡಿದೆ

ಈ ಹಿಂದೆ ಆಚರಣೆಯಲ್ಲಿದ್ದ ಮಧ್ಯಸ್ತಿಕೆಯಿಂದ ಆಸ್ತಿಯನ್ನು ವಿಭಜಿಸುವ ಪದ್ದತಿಯನ್ನು ಹೊರತುಪಡಿಸಿ, ಜನರ ಕಲ್ಯಾಣಕ್ಕಾಗಿ, ಪಿತ್ರಾರ್ಜಿತ ಆಸ್ತಿಯ ಹಕ್ಕುದಾರಿಕೆಯನ್ನು ಭೂಕಂದಾಯ ವ್ವವಸ್ಥೆ ಮೂಲಕ ನಿರ್ವಹಿಸುತ್ತಿರುವುದು ಎಲ್ಲೂ ಕಂಡು ಬರುವುದಿಲ್ಲ. ಭಾರತ ದೇಶಕ್ಕೆ 1947 ಸ್ವಾಂತತ್ರ್ಯ ಸಿಗುವ ತನಕ ಬ್ರಿಟಿಷರು ಈ ಸಣ್ಣ ರಾಜ್ಯವನ್ನು ತಮ್ಮ ಆಳ್ವಿಕೆಗೆ ತೆಗೆದುಕೊಂಡು ಮದ್ರಾಸ್ ಪ್ರಾಂತ್ಯದ ನಿಯಮಗಳಿಗೆ ಒಳಪಟ್ಟು ಅಡಳಿತದಲ್ಲಿ ಹಲವಾರು ಸುಧಾರಣೆಗಳನ್ನು ತರುವ ಮೂಲಕ ಆಡಳಿತವನ್ನು ಸುವ್ಯವಸ್ಥಿತಗೊಳಿಸಿದರು. ಸ್ವಾಂತತ್ರ್ಯನಂತರ ಕೊಡಗು ಕೇಂದ್ರಾಡಳಿಕ್ಕೆ ಒಳಪಟ್ಟ ಪ್ರತ್ಯೇಕ ಸಿ ರಾಜ್ಯವಾಗಿ ಮುಂದುವರೆಯಿತು.

ಈ ಪ್ರತ್ಯೇಕ ಸಿ ರಾಜ್ಯದಲ್ಲಿ ಒಬ್ಬ ಮುಖ್ಯ ಆಯುಕ್ತರ ನಾಯಕತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಯು ಕಾರ್ಯ ನಿರ್ವಾಹಿಸುತ್ತಿತ್ತು. ಇವರ ಅಧೀನದಲ್ಲಿ ಆಯುಕ್ತರು,, ಸಹಾಯಕ ಆಯುಕ್ತರು ಮತ್ತು ಇತರರು.ಕಾರ್ಯನಿರ್ವಾಹಿಸುತ್ತಿದ್ದರು. ಕ್ಯಾಲಿಕಟ್ ಮತ್ತು ಎರ್ನಾಕುಲಂ, ಮದ್ರಾಸ್ ನಂತಹ ದೂರದ ಸ್ಥಳಗಳಿಂದ ವಕೀಲರು ಮಡಿಕೇರಿ ನ್ಯಾಯಾಲಯದ ಕಾರ್ಯಕಲಾಪದಲ್ಲಿ ಭಾಗವಹಿಸುತ್ತಿದ್ದರು. 1956 ರಲ್ಲಿ ಕೂರ್ಗ್ ಆಗಿನ ಮೈಸೂರು ರಾಜ್ಯದಲ್ಲಿ ವಿಲೀನಗೊಂಡು ಜಿಲ್ಲೆಯಾಗಿತ್ತು. ಕೊಡಗಿನ ಮತ್ತು ನ್ಯಾಯಾಂಗದ ಇತಿಹಾಸವನ್ನು ಓದಲು ತುಂಬಾ ಆಸಕ್ತಿಯುಳ್ಳ ವಿಷಯವಾಗಿದೆ.ವಿವರಗಳು ವಿಭಿನ್ನವಾಗಿವೆ. ಈ ಹಿನ್ನೆಲೆಯಲ್ಲಿ ಕೊಡಗಿನ ನ್ಯಾಯಾಂಗವು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣದೊಂದಿಗೆ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಕೊಡಗು ಜಿಲ್ಲೆಯು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವನ್ನು ಹೊಂದಿದೆ.

ಮಡಿಕೇರಿಯಲ್ಲಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮತ್ತು ಸಿಜೆಎಂ ನ್ಯಾಯಾಲಯ ಮತ್ತು ಎರಡು ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಗಳಿವೆ. ಇತರೆ ವಲಯಗಳಲ್ಲಿ ನ್ಯಾಯದ ವಿಚಾರಣೆಗಾಗಿ ಮಡಿಕೇರಿನಲ್ಲಿ ಕಾರ್ಮಿಕ ನ್ಯಾಯಾಲಯ ಮತ್ತು ಜಿಲ್ಲೆಯ ಜಿಲ್ಲಾ ಗ್ರಾಹಕರ ನಿವಾರಣಾ ವೇದಿಕೆ ಇರುತ್ತದೆ..ನ್ಯಾಯಾಲಯದ ಇತರೆ ಎರಡು ಕೇಂದ್ರಗಳು ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿದೆ. ಸೋಮವಾರಪೇಟೆ ತಾಲ್ಲೂಕು ಎರಡು ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯಗಳನ್ನು ಹೊಂದಿರುತ್ತದೆ, ವಿರಾಜಪೇಟೆ ತಾಲ್ಲೂಕಿನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮತ್ತು ಒಬ್ಬ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯ ಇರುತ್ತದೆ. ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಹೋಬಳಿಯಲ್ಲಿ
ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯವನ್ನು ಇತ್ತೀಚೆಗೆ ತೆರೆಯಲಾಗಿದೆ.

ಮೂಲಸೌಕರ್ಯ

ಜಿಲ್ಲಾ ನ್ಯಾಯಾಲಯವು ಮಡಿಕೇರಿ ಪಟ್ಟಣದ ಹೃದಯ ಭಾಗದಲ್ಲಿದೆ ಮತ್ತು ಹತ್ತಿರದಲ್ಲಿ ಸಮಾರು ಸರ್ಕಾರಿ ಕಚೇರಿಗಳಿವೆ. ಕೊಡಗು ಘಟಕದಲ್ಲಿರುವ ಎಲ್ಲಾ ನ್ಯಾಯಾಲಯಗಳು ಗಣಕೀಕೃತವಾಗಿವೆ. ಎಲ್ಲಾ ನ್ಯಾಯಾಲಯಗಳು ಎಲ್ಲಾ ಝೆರಾಕ್ಸ್ ಯಂತ್ರಗಳಿಂದ ಸರಬರಾಜು ಮಾಡಲ್ಪಟ್ಟಿವೆ . ಜಿಲ್ಲಾ ನ್ಯಾಯಾಲಯವು ಫ್ಯಾಕ್ಸ್ ಯಂತ್ರವನ್ನೂ ಹೊಂದಿದೆ. ಪೊನ್ನಂಪೇಟೆಯಲ್ಲಿ ಹೊಸದಾಗಿ ಸ್ಥಾಪಿತವಾದ ನ್ಯಾಯಾಲಯವನ್ನು ಹೊರತುಪಡಿಸಿ ಎಲ್ಲಾ ನ್ಯಾಯಾಲಯಗಳು ಉತ್ತಮ ಕಟ್ಟಡವನ್ನು ಹೊಂದಿವೆ ಮತ್ತು ಪೊನ್ನಂಪೇಟೆ ನ್ಯಾಯಾಲಯದ ಕಟ್ಟಡದ ನಿರ್ಮಾಣ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಕಾರ್ಮಿಕ ನ್ಯಾಯಾಲಯಕ್ಕೆ ಸ್ವಂತ ಕಟ್ಟಡ, ಮತ್ತು ಇದರ ಪ್ರಧಾನ ಅಧಿಕಾರಿಗಳಿಗೆ ವಸತಿ ನಿಲಯ. ಹಾಗೂ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ ಸಿ ಸೋಮವಾರಪೇಟೆ ಮತ್ತು ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ಪೊನ್ನಂಪೇಟೆಗೆ ವಸತಿ ನಿಲಯಗಳ ವಶ್ಯಕತೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟುhttp://ecourts.gov.in/kodagu